ಊರಿಗೊಂದು ಹಳ್ಳವಾದಡೆ, ನೀರು ಕುಡಿವವರಿಗೂ ಒಂದೆ ಹಳ್ಳವೆ? ಇಲ್ಲಿಲ್ಲ. ಅರಿವವರಿಗೆ ಒಬ್ಬ ದೇವರಾದಡೆ, ಆ ಲೋಕದವರಿಗೂ ಒಬ್ಬನೆ? ಇಲ್ಲಿಲ್ಲ. ನಮ್ಮ ಕಪಿಲಸಿದ್ಧಮಲ್ಲೇಶನಲ್ಲದೆ ಬೇರೆ ದೈವವಿಲ್ಲ.
ಊರೂರ ಮಧ್ಯದಲಿ ಆತನಿಪ್ಪರಮನೆಯ ಆರು ಅರಿಯರು ಆರು ದ್ವಾರಂಗಳ. ಅಂಗ ಲಿಂಗದಲ್ಲಿದ್ದು ಸಂಗವಂ ತೊರೆದೀಗ ಸುಸಂಗ ಸಾನಂದವಾದವರರಿಯರು. ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಿಪ್ಪರ ಮನೆ ಈ ಪರಿಯಯ್ಯಾ.