ಐನಾಯೆಂಬ ಅಕ್ಷರದ ಭೇದವನರಿತಡೆ ಅಪ್ಪುದರಿದೊಂದೂ ಇಲ್ಲ. ಸೀಮೆಯ ಮೀರಿದ ಸಂಬಂಧ ಸಂಬಂಧವ ಮೀರಿದ ಸೀಮೆ, ಅನುಮತದ ಮೀರಿದ ಆದ್ಥಿಕ್ಯ ಅಕ್ಷರವೆರಡರ ಅದ್ಥಿಕಾರ ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗ.
ಐ ಬ್ರಹ್ಮಂದತ್ತಲಾದ ಸೀಮೆಯ, ಆ ಸೀಮೆಯ ಮೀಱ್ಞದ ಸಂಬಂಧ, ಆ ಸಂಬಂಧ ಅಯ್ಯನ ರೂಪು, ಆ ಅಯ್ಯ ವಾಙ್ಮನಕಗೋಚರನೆಂಬರು. ಆ ಅಯ್ಯ ಭಕ್ತ ಕಾರಣ ಪರಶಿವಮೂರ್ತಿಯೆಂದೆಂಬರು. ಆವುದು ಹುಸಿ? ಆವುದು ದಿಟ? ಈ ಉಭಯದ ಸಂಸಿದ್ಧವ ನಿನ್ನವರು ನೀವು ಬಲ್ಲಿರಿ, ಅನೇಕೆಂದರಿಯೆ ಕಪಿಲಸಿದ್ಧಮಲ್ಲಿಕಾರ್ಜುನ
ಐದು ಬ್ರಹ್ಮದಲ್ಲಿ ಅಯ್ಯಾ, ನೀನು ಅತಿಶಯ ಜ್ಯೋತಿರ್ಮಯನು. ಆನಂದಸ್ಥಾನದಲ್ಲಿ ಅಯ್ಯಾ, ನೀನು ಅತಿಶಯ ನಿತ್ಯಮಯನು. ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು. ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯನು. ಗುರುವಿನ ಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ ಶಿವನೇ, ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ.