ಭ್ರೂಮಧ್ಯದಿಂ ಮೇಲೆ ಒಪ್ಪಿಪ್ಪ ಕನ್ನಿಕೆಯ ನಿನ್ನ ಜ್ಯೋತಿರ್ಮಯದ ಬೆಳಗ ತೋರಾ. ಆ ಬೆಳಗಿನ ಬಳಗಂಗಳು ಶುದ್ಧಸಿದ್ಧ ಪ್ರಸಿದ್ಧವ ಪ್ರವೇಶಿಸಿಪ್ಪವು. ನಿನ್ನಾನಂದಸ್ಥಾನದ್ಲ ಅತಿಶಯವಪ್ಪ ಬೀಜಾಕ್ಷರದ್ವಯಂಗಳುಂಟು. ಅದರ ಮಹಾಪ್ರಭೆಯಲ್ಲಿ ಒಪ್ಪಿಪ್ಪ ಅವ್ಯಯ ವಾಙ್ಮನಕ್ಕಗೋಚರನಾಗಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೋಡಿಹೆನೆಂಬ ಭರವಸ ಘನ, ತೋರಾ ಎಲೆ ಅವ್ವಾ
ಭಕ್ತರು ಭಕ್ತಿವಿಡಿದು ಆಚರಿಸಲಿ; ಅವು ಬಲ್ಲೆವಯ್ಯಾ. ಆತನ ಭಕ್ತಿ ನೈಷೆ* ; ಆತ ನಡೆದುದು ಜಗತ್ಪಾವನ; ಆತ ನಡೆಸಿದುದು ಜಗಜ್ಜನನ ನೋಡಾ. ಇದು ಪುಸಿಯಾದಡೆ ಹಲ್ಲುದೋರಿ ಮೂಗ ಕೊಯ್ಯಿ, ಕಪಿಲಸಿದ್ಧಮಲ್ಲಯ್ಯಾ.