ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮುನ್ನ ಮಾಡಿದ ದೇಹ ನಿರ್ವಯಲಾದಡೆ, ಧರಿಸುವುದೇಕೋ ಕಲ್ಲು ಲಿಂಗವ, ಎಲೆ ಅಯ್ಯಾ? ಅಂಗಗುಣ ಲಿಂಗಕ್ಕಾಯಿತ್ತು ; ಲಿಂಗಗುಣ ಅಂಗಕ್ಕಾಯಿತ್ತು. ಇವೆಲ್ಲ ಭಾವಸಂಕಲ್ಪವಿಕಲ್ಪವು. ಅಂಗ ಲಿಂಗವೆಂಬುದು ಪಳಮಾತು. `ಲಿಂಗಮಧ್ಯೇ ಜಗತ್ಸರ್ವಂ' ಎಂಬುದು ಅಖಂಡಲಿಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಮೂರೂರ ಮಧ್ಯದಲ್ಲಿ ಆರು ವರ್ಣದ ಪದ್ಮ ಬೇರೆ ಬೇರವಕೆ ಅಕ್ಷರಗಳಾರು. ಏರಿ ಬಂದಪೆವೆಂಬ ಕರ್ಮಯೋಗಿಗಳೆಲ್ಲ ಗಾರಾಗಿ ಹೋದರು. ಮೀರಿದ ಶಿವಯೋಗ ಗಾರಾದವರಿಗೆ ಸೂರೆಯೆ, ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ಮಣ್ಣ ಕೊಟ್ಟು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ಮಣ್ಣಿನ ಪುಣ್ಯ ಮುಕ್ಕಣ್ಣನ ಮುಖಕ್ಕೆ ಬಂತ್ತು. ನೀರನೆರೆದು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ನೀರಿನ ಪುಣ್ಯ ನಿರಂಜನನ ಮುಖಕ್ಕೆ ನಿಮಿರಿತ್ತು. ಜ್ಯೋತಿಯ ಬೆಳಗಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. [ಜೋತಿಯ ಪುಣ್ಯ.... ದೀಪದ.... ಮುಖಕ್ಕೆ ಹೊಯಿತ್ತು.] [ಚಾಮರವ ಬೀಸಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ ಹೊಲ್ಲ.] ಚಾಮರದ ಪುಣ್ಯ ಚಾಮರಾದ್ಥೀಶನ ಮುಖಕ್ಕೆ ಅಮರಗೊಂಡಿತ್ತು. ದೇವಾಲಯವ ಕಟ್ಟಿ ದೇವತ್ವವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ದೇವಾಲಯದ ಪುಣ್ಯ ಅಧೋಮುಖಂಗೆ ಸೇರಿತ್ತು. ಕೊಟ್ಟ ಭಕ್ತನಾರನೂ ಕಾಣೆ, ಕೈಕೊಂಡ ಜಂಗಮನಾದರೂ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಂಗಳದ ಮನೆಯಲ್ಲಿ ಸಂಗ ತನಗಾನಂದ ಸಂಗವೆ ನೆಲೆಮನೆಯು, ನಿತ್ಯವಾಗಿಪ್ಪ ಶ್ವೇತ ಜಲದಲಿಪ್ಪ ರೀತಿ ಸಂಖ್ಯೆಯನರಿದು, ಧಾತುವನು ಅತಿಗಳೆದು, ತೂಗಿ ತೂಗಿ ಆಡಿವೋದಾತನು ಮೀರಿ ಕಂಡನು. ಒಂದ ತೋರಿದನು ಅತಿಶಯವ ಲೋಕಕೆಲ್ಲಾ, ನಿರ್ಲೋಕ ನಿರ್ನಾಮ ನಿತ್ಯನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತೋರಿದನು ಸಾಯುಜ್ಯಪದವ ಮೀರಿ.
--------------
ಸಿದ್ಧರಾಮೇಶ್ವರ
ಮುಕ್ತಿಯ ಕೂಟಕ್ಕೆ ಮೂಗ ನೀನೆ ಬಸವಾ. ಭಕ್ತಿಯ ತನುಸಂಬಂದ್ಥಿ ನೀನೆ ಬಸವಾ. ಎನಿತೆನಿತು ಜರಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಎನಿತೆನಿತು ಕಡಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಮೂರು ಗುಣ ಮುರಿಮುರಿದು ಮೂರಕ್ಕೆ ತಂದು ಮುರಿಟ್ಟಿತ್ತು ನೋಡಾ, ಮಾರಹರ ಪಾದಪದ್ಮಭ್ರಮರ. ಮೂರು ಗುಣದಂತಾಚರಿಸಬಾರದು; ಮೂರು ಗುಣ ಬಿಡಬಾರದು ನೋಡಾ. ಮೂರರಿಂದಾರು ಲಿಂಗವ ದಾಂಟಿ, ಮೂರರಲ್ಲಿ ಐಕ್ಯವ ನೋಡೆ ಪುರಾರಿ ಪರಮಾತ್ಮ ಕಪಿಲಸಿದ್ಧಮಲ್ಲಿಕಾರ್ಜುನಾ ತಾನೆ ನೋಡಾ, ಮಾರಯ್ಯಾ.
--------------
ಸಿದ್ಧರಾಮೇಶ್ವರ
ಮೂರ್ತಿ ಮೂರರಲ್ಲಿ [ಅ]ಮೂರ್ತಿಯಲ್ಲಿ[ಲೆಂ]ದು ಬಂದೆಯಲ್ಲಾ ಮಡಿವಾಳಾ. ದೇಹ ಮೂರರಲ್ಲಿ ನಿರ್ದೇಹಿಯಾಗಿ ಬಂದಾಚರಿಸಿದೆಯಲ್ಲಾ ಮಡಿವಾಳಾ. ವಾಣಿ ನಾಲ್ಕರಲ್ಲಿ ಆನು ನಾನಲ್ಲೆಂಬ ಭಾವವಳಿದು ಶಬ್ದ ಮುಗ್ಧವಾಗಿ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಚಿದಾಕಾಶವಾಗಿ ಪೋದೆಯಲ್ಲಾ ಮಡಿವಾಳಾ.
--------------
ಸಿದ್ಧರಾಮೇಶ್ವರ
ಮಾಡಿಸಯ್ಯ ಎನಗೆ ನಿನ್ನವರ ಸಂಗವ, ಮಾಡಿಸಯ್ಯ ಎನಗೆ ನಿನ್ನವರ ಆನಂದವ, ಆಗಿಸಯ್ಯ ನಿನ್ನವರಾದಂತೆ, ನೋಡಯ್ಯ, ನಿನ್ನವರ ಕೂಡೆ ಸಂಗವನು ಮಾಡಿಸಯ್ಯ, ಎನಗೆ ಬಚ್ಚ ಬರಿಯ ಭಕ್ತಿಯನು ಕೊಡಿಸಯ್ಯ. ಎನಗೆ ಪಾದೋದಕ ಪ್ರಸಾದವನೊಚ್ಚತ ಸಲಿಸಯ್ಯ. ನಿನ್ನವರ ಕೂಡಿ ಸಲಿಕೆಗೆ ಇರಿಸಯ್ಯ ನಿನ್ನವರ ಪಾದದ ಕೆಳಗೆ. ನಿತ್ಯನಿತ್ಯನಾಗಿ ಬರಿಸರಯ್ಯ ಎನ್ನ ಭವಭವದಲ್ಲಿ, ಬರಿಸಿ ಬರಿಸಿ ಕಾಲಕಾಮಂಗೆ ಗುರಿ ನಿಗ್ರಹಕ್ಕೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಇನಿತನು ಇತ್ತು ಕೆಡಿಸಯ್ಯಾ ಎನ್ನ ಭವದ ಹುಟ್ಟ.
--------------
ಸಿದ್ಧರಾಮೇಶ್ವರ
ಮಹವನೊಡಗೂಡಿಹೆವೆಂದೆಂಬೆರಿ: ಮಹವೇನುತ್ತಮದಲ್ಲಿಪ್ಪುದೊ, ಮಧ್ಯಮದಲ್ಲಿಪ್ಪುದೊ, ಅಧಮದಲ್ಲಿಪ್ಪುದೊ? ಇಪ್ಪುದಿಪ್ಪುದು ಉತ್ತಮದಲ್ಲಿ, ಇಪ್ಪುದಿಪ್ಪುದು ಮಧ್ಯಮದಲ್ಲಿ, ಇಪ್ಪುದಿಪ್ಪುದು ಅಧಮದಲ್ಲಿ, ಮಹಾಪ್ರಸಾದಸಂಪನ್ನರಾದವರಿಗೆ ಮಹವು ಸರ್ವಾಂಗದಲ್ಲಿಪ್ಪುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮನ ಮುಂದಿಟ್ಟು ಮಹಾದೇವಾ ಒಲಿದನೆಂಬುದು ಪುಸಿಯಯ್ಯಾ. ಮನವಿಲ್ಲದಿರೆ ಮಹಿಮನ ಒಲುಮೆ ನೋಡಯ್ಯಾ. ಮನದ್ಲಹ ಮಹಾದೇವನ ಮುಂಟ್ಟು ತೋರುವ ಉಭಯಭ್ರಷ್ಟರ ಮೆಚ್ಚುವನೆ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ಮನದ ಮನವನು ಕಳೆಯಾ ಅಯ್ಯಾ, ಮನವೇ ಶುದ್ಧನಾಗು, ಮನವೇ ಸಿದ್ಧನಾಗು, ಮನವೆ ಪ್ರಸಿದ್ಧನಾಗಯ್ಯಾ, ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥಾ ಮನದ ಸರ್ವಾಂಗ ನೀನಾಗಯ್ಯಾ.
--------------
ಸಿದ್ಧರಾಮೇಶ್ವರ
ಮುಖವನರಿಯದೆಂತರ್ಪಿಸುವೆನಯ್ಯಾ? ಅದು ಭವ ಹರಿಯದು. ಅವಯವದ ಪರಿಯಾಣದಲ್ಲಿ ಅನಿಮಿಷವೆಂಬ ಓಗರವನಿಕ್ಕಿ, ತನುತ್ರಯದಿಂ ಮೇಲಣ ಆನಂದ ಕೋಣೆಯಲ್ಲಿ, ಅನಿಮಿಷಂಗಾರ್ಚನೆಯ ಮಾಡಬಲ್ಲಡೆ ಆತನನುಪಮ ಲಿಂಗಾರ್ಚಕನೆಂಬೆ; ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನೆಂಬೆ.
--------------
ಸಿದ್ಧರಾಮೇಶ್ವರ
ಮೂಗ ಕಂಡ ಕನಸಿನಂತಾಯಿತ್ತಯ್ಯಾ, ಎನ್ನ ಭಕ್ತಿ ಹೇಳಲಾರಿಗೆ ಅರಿದು ಅಯ್ಯಾ, ಮತ್ತೆ ತೋರಲಾರಿಗೆ ಅರಿದು ಅಯ್ಯಾ ಶೂನ್ಯಕಾಯಕ್ಕೆ ಬಂದಡೆ ಸರ್ವರಿಗೆ ಕರತಳಾಮಳಕ ಕಪಿಲಸಿದ್ಧಮಲ್ಲಿಕಾರ್ಜುನ ಅಯಾ
--------------
ಸಿದ್ಧರಾಮೇಶ್ವರ
ಮನವೆಂಬ ಸಂಕಲ್ಪವನರಿಯೆನು- ಸಂಕಲ್ಪ ಸಿದ್ಧಿಯಾಯಿತ್ತಾಗಿ. ಸಂಕಲ್ಪವೆಂಬ ಸಂಬಂಧವನರಿಯೆನು ನಿಮ್ಮ ವಿಚಾರವೆಡೆಗೊಂಡಿತ್ತಾಗಿ. ನಿಮ್ಮ ವಿಚಾರವೆ ಅಂತರಂಗದೊಳಗೆ ತುಂಬಿತ್ತಾಗಿ, ಎನ್ನ ಮನದ ಮುಂದೆಲ್ಲಾ ನೀನೆಯಾಗಿರ್ದೆಯಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಮೂರರ ಸೀಮೆಯಲ್ಲಿ ತೋರಿದಾತ ಗುರುವೆಂಬೆನಯ್ಯಾ. ತೋರಿದುದೆ ವಿಸ್ತಾರವೆಂದ್ದಡಾತನನು ಆರೂಢದೈಕ್ಯನೆಂಬೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮನದ್ಲಲ್ಲದ ಮಹಾಂತರು ಮನದಲ್ಲಿ ಘನಗೊಳಿಸಬಾರದ ಅಂಗನೆಯರ್ಲ! ಮನದ್ಲಲ್ಲದ ಕಾಯದ್ಲಲ್ಲದ ಮಹಾಂತರ ಕಂಡಡೆ, ಎನ್ನ ಮನ ಮನೋಹರವಾಯಿತ್ತಯ್ಯಾ, ಮಹಾದೇವ ಮದನಮರ್ದನ ಮಹಾಂತ ಮಹಿಮಾಶಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮೂರು ಮಠ ಮೂವತ್ತು ಆರಾಗಿ ತೋರುತಿದೆ ಮೀರಿಪ್ಪ ಬೊಮ್ಮ ತಾ ಹಮ್ಮಡರಿತು. ಮಠವು ತಾನೊಂಬತ್ತು ಕುಟಿಲವು ಹಲವಾಗಿ ನಿಟಿಲನೇತ್ರನ ರೂಪು ಅಜಲೋಕದಾ ಸಾದಾಖ್ಯ ದೇಹವಾರಾರು ಹೊಗಲಿಲ್ಲೆಲ್ಲಿ ಮೂವರಿಗೆ ತಾನು ಶಕ್ಯವಲ್ಲ. ನಾದ ಬಿಂದು ಕಳಾತೀತ ಕಪಿಲಸಿದ್ಧಮಲ್ಲಿಕಾರ್ಜುನನ ಆದ್ಥಿಕ್ಯವನರಿವ ಯೋಗಿ ಯಾರು?
--------------
ಸಿದ್ಧರಾಮೇಶ್ವರ
ಮೃದು ರುಚಿ ರೂಪು ಕೂಡಿ ಸಕ್ಕರೆಯಾಯಿತ್ತು. ಗುರು ಲಿಂಗ ಜಂಗಮ ಕೂಡಿ ವಸ್ತುವಾಯಿತ್ತು. ಮೃದುವಿನಂತೆ ಗುರು, ರುಚಿಯಂತೆ ಲಿಂಗ, ರೂಪಿನಂತೆ ಜಂಗಮ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಮಾಹೇಶ್ವರನಾದಾತ ಮರಣಕ್ಕೊಳಗಾಗ, ಕರಣೇಂದ್ರಿಯಂಗಳಿಗೆ ಎಡೆಗುಡ. ಕಾಲ ಕಲ್ಪಿತನಲ್ಲ, ಕರ್ಮಕ್ಕೆ ವಿರಹಿತ. ಆತನು ತನು ಸಾಕ್ಷಾತ್ ಶಿವನ ತನು. ಆತ ನಿತ್ಯ ಕೇವಲ ಮುಕ್ತ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಮಾಹೇಶ್ವರನು.
--------------
ಸಿದ್ಧರಾಮೇಶ್ವರ
ಮುನ್ನಲಿ ಕಂಡ ವಸ್ತು ಮುನ್ನವೆ ಅಡಗಿತ್ತು. ಮನ್ನಣೆಯ ಶೂಲಕ್ಕೆ ಮುನ್ನವೆ ಹೋದರು. ಚೆನ್ನಬಸವನೆಂಬ ಪರಿಪೂರ್ಣಜ್ಞಾನಿ ಪ್ರಭಾಸಂಪೂಜ್ಯನಾದ. ಕನ್ನೆಯರ ಕೂಟವಳಿಯಿತ್ತು ಚೆನ್ನಬಸವಣ್ಣನಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಮುಖದಿಂದ ಹುಟ್ಟಿಪ್ಪ ಮೂರರ್ಪಿತೋದಕದ ಒಳಗೆ, ಹುಟ್ಟಿತ್ತು ಶುದ್ಧ ಪ್ರಸಾದೋದಕ. ಸದಮಲ ಜಾÐನದಂಘ್ರಿಯಲ್ಲಿ ಹುಟ್ಟಿತ್ತೊಂದುದಕ. ಅದನು ಒಯ್ದೆರೆದಲ್ಲಿ ಉದ್ಭವಿಸಿತ್ತು ತಾ ಕರಣೇಂದ್ರಿಯವನತಿಗಳೆದು ಹತ್ತನೆಯ ಪಾದೋದಕ ಕ್ರಮವಿಂತುಟಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮುಳುಗುವಾತ ಮುಳುಗುವವನನೆತ್ತಬಲ್ಲನೆ? ತಾ ಮಾಯೆಯೊಳಗಾಗಿ, ಮಾಯಿಕರ ತನ್ನ ಪಾದಾಂಬುವಿಂ ಪರಿಹರಿಪೆನೆಂಬವ ತೆಗೆದುಕೊಂಬವ ಇವರಿರ್ವರೂ ಮುಳುಗಿ ಯಮಪಾಶಕ್ಕೊಳಗಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಾನಾಪಮಾನವೆಂಬುದು ಮನದ ಭ್ರಮೆ ನೋಡಯ್ಯಾ. ಮೇಲಕ್ಕೆ ಕರೆದಡೆ ಮಾನವೆಂಬುದೀ ಲೋಕ; ಮೂಗುವಟ್ಟಡೆ ಅಪಮಾನವೆಂಬುದೀ ಲೋಕ. ತಿರುಗುವ ಭೂಮಿಯೆಲ್ಲ ನಕಾರ ಪ್ರಣವವಾಯಿತ್ತು. ಏಕೈಕವಾದ ಭೂಮಿಯಲ್ಲಿ ಪೀಠವ ಕೊಟ್ಟು ಮನ್ನಿಸುವ ಅಣ್ಣಗಳ ಬಾಯಲ್ಲಿ ಹುಡಿಮಣ್ಣ ಹೊಯ್ಯದೆ ಮಾಬನೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಮಹಾಬೆಳಗಿನಲ್ಲಿ ಭವಿಸಿದಳವ್ವೆ, ಮಹಾಬೆಳಗಿನಲ್ಲಿ ಪ್ರಬಲವಾಗಿ ಮಹಾಬೆಳಗಿನಲ್ಲಿ ಬೆಳಗೆ ಭಕ್ತರಲ್ಲಿಯೆ ತೋರಿ ಮಹಾಬೆಳಗಿನ ಬೆಳಗು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...